ಹೃದಯಾಘಾತವಲ್ಲ, ಕೊಲೆ ಶಂಕೆ: 2 ತಿಂಗಳ ಬಳಿಕ ಸಾರಿಗೆ ಸಿಬ್ಬಂದಿಯ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

​ಧಾರವಾಡ/ಅಣ್ಣಿಗೇರಿ: ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ನಂಬಲಾದ ಪ್ರಕರಣವೊಂದು ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಮಗನ ಸಾವು ಸಹಜವಾದುದಲ್ಲ, ಇದೊಂದು ಕೊಲೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ ಹಿನ್ನೆಲೆಯಲ್ಲಿ, ಹೂತಿದ್ದ ಶವವನ್ನು ಎರಡು ತಿಂಗಳ ಬಳಿಕ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ ಘಟನೆ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ನಡೆದಿದೆ. ​ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKSRTC) ಚಾಲಕರಾಗಿದ್ದ ಬಾಬಾಜಾನ್ ಚಿನ್ನೂರು (51) ಮೃತಪಟ್ಟವರು. ಪತ್ನಿ ವಹಿದಾಬಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ಬಾಬಾಜಾನ್,…

Read More

ಧಾರವಾಡದ ‘ಕಿಸಾನ್ ಮಾಲ್’: ಒಂದೇ ಸೂರಿನಡಿ ರಿಯಾಯಿತಿ ದರದಲ್ಲಿ ಕೃಷಿ ಪರಿಕರ ಲಭ್ಯ

ಧಾರವಾಡ, ಜ. 21: ಧಾರವಾಡ ಜಿಲ್ಲೆ ಹಾಗೂ ಸುತ್ತಮುತ್ತಲಿನ ರೈತರ ಅನುಕೂಲಕ್ಕಾಗಿ ತೋಟಗಾರಿಕೆ ಇಲಾಖೆಯು ಇಲ್ಲಿನ ಕುಂಬಾಪುರ ಫಾರ್ಮ್ ಆವರಣದಲ್ಲಿರುವ ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರದಲ್ಲಿ ‘ಕಿಸಾನ್ ಮಾಲ್’ ಅನ್ನು ಸ್ಥಾಪಿಸಿದ್ದು, ರೈತರಿಗೆ ಅಗತ್ಯವಿರುವ ಕೃಷಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಒದಗಿಸುತ್ತಿದೆ. ​ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಸ್ಥಾಪಿಸಲಾಗಿರುವ ಈ ಕಿಸಾನ್ ಮಾಲ್‌ನಲ್ಲಿ, ತೋಟಗಾರಿಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅವಶ್ಯಕವಾದ ಬಿತ್ತನೆ ಬೀಜಗಳು, ರಸಗೊಬ್ಬರಗಳು, ಸಾವಯವ ಗೊಬ್ಬರಗಳು, ನೀರಾವರಿ ಪರಿಕರಗಳು, ಕೃಷಿ ಯಂತ್ರೋಪಕರಣಗಳು ಹಾಗೂ ಸಲಕರಣೆಗಳು ಲಭ್ಯವಿವೆ….

Read More

​ಬಾಲಗೌರವ ಹಾಗೂ ‘ಪುಸ್ತಕ ಚಂದಿರ’ ಪ್ರಶಸ್ತಿಗೆ ಅರ್ಜಿ ಆಹ್ವಾನ: ಫೆ. 20 ಕೊನೆಯ ದಿನ

​ಧಾರವಾಡ: ಕರ್ನಾಟಕ ಬಾಲವಿಕಾಸ ಅಕಾಡೆಮಿಯು 2024-25 ಹಾಗೂ 2025-26ನೇ ಸಾಲಿನ ‘ಬಾಲಗೌರವ’ ಪ್ರಶಸ್ತಿ ಹಾಗೂ 2024 ಮತ್ತು 2025ನೇ ಸಾಲಿನ ‘ಮಕ್ಕಳ ಪುಸ್ತಕ ಚಂದಿರ’ ಪ್ರಶಸ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ​ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದೊಳಗಿನ ಮಕ್ಕಳಿಗೆ ಬಾಲಗೌರವ ಪ್ರಶಸ್ತಿ ನೀಡಲಾಗುತ್ತದೆ. ಕ್ರೀಡೆ, ಸಂಗೀತ, ನೃತ್ಯ, ನಟನೆ, ಚಿತ್ರಕಲೆ, ವಿಜ್ಞಾನ ಹಾಗೂ ಸಂಶೋಧನೆ ಸೇರಿದಂತೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿ ಪ್ರಶಸ್ತಿ ಪುರಸ್ಕೃತವಾಗಿರುವ ಮಕ್ಕಳು ಇದಕ್ಕೆ ಅರ್ಜಿ…

Read More

ಹೆಚ್ಚುವರಿ ಶಿಕ್ಷಕರ ನಿಯೋಜನೆಯಲ್ಲಿ ಕರ್ತವ್ಯಲೋಪ: ನವಲಗುಂದ ಬಿಇಒ, ಡಿಡಿಪಿಐ ವಿರುದ್ಧ ಲೋಕಾಯುಕ್ತಕ್ಕೆ ದೂರು

ನವಲಗುಂದ: ಹೆಚ್ಚುವರಿ ಶಿಕ್ಷಕರು ತಾವೇ ಆಯ್ಕೆ ಮಾಡಿಕೊಂಡ ಶಾಲೆಗಳಿಗೆ ಹಾಜರಾಗುವಂತೆ ನೋಡಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಡಿ ನವಲಗುಂದದ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಹಾಗೂ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಎಸ್.ಎಸ್. ಕೆಳದಿಮಠ ಅವರ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ತಿಳಿಸಿದ್ದಾರೆ. ​ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 2025ನೇ ಸಾಲಿನ ಸೆಪ್ಟೆಂಬರ್ 9 ರಂದು ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕುಗಳ ಹೆಚ್ಚುವರಿ ಶಿಕ್ಷಕರ…

Read More

ಕುಂದಗೋಳ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅಶೋಕ ಘೋರ್ಪಡೆ ಆಯ್ಕೆ

ಕುಂದಗೋಳ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕುಂದಗೋಳ ತಾಲ್ಲೂಕು ಘಟಕದ ಪದಾಧಿಕಾರಿಗಳ ಚುನಾವಣೆ ಬುಧವಾರ ಪಟ್ಟಣದಲ್ಲಿ ಜರುಗಿದ್ದು, ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಅಶೋಕ ಘೋರ್ಪಡೆ ಅವರು ಆಯ್ಕೆಯಾಗಿದ್ದಾರೆ. ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಶೋಕ ಘೋರ್ಪಡೆ ಹಾಗೂ ಖಾದರಸಾಬ ಡಗಲಿ ಅವರು ನಾಮಪತ್ರ ಸಲ್ಲಿಸಿದ್ದರು. ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಶೋಕ ಘೋರ್ಪಡೆ 04 ಮತಗಳನ್ನು ಪಡೆದು ಜಯಶಾಲಿಯಾದರು. ಇದೇ ವೇಳೆ ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ದೀಪಾವಳಿ ಹಾಗೂ ಖಜಾಂಚಿಯಾಗಿ ಶೇಖಪ್ಪ ಕುಂದಗೋಳ ಅವರು ಅವಿರೋಧವಾಗಿ…

Read More

ಜಿಲ್ಲಾ ಮಾನವ ಅಭಿವೃದ್ಧಿ ಹಾಗೂ ಸುಸ್ಥಿರ ಯೋಜನೆ: ನಿಖರ ದತ್ತಾಂಶ ಒದಗಿಸುವುದು ಇಲಾಖೆಗಳ ಕರ್ತವ್ಯ – ಎಚ್.ಶಶಿಧರ್

ಧಾರವಾಡ, ಜ. 20: ಜಿಲ್ಲಾ ಮಾನವ ಅಭಿವೃದ್ಧಿ ವರದಿ (DHDR)-2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ (ISDDP)-2031ರ ತಯಾರಿಕೆಯಲ್ಲಿ ಸರ್ಕಾರಿ ಇಲಾಖೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮುಂದಿನ 5 ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ನಿಖರವಾದ, ವಿಶ್ವಾಸಾರ್ಹ ಹಾಗೂ ವಾಸ್ತವಿಕ ಮಾಹಿತಿಯನ್ನು ಒದಗಿಸುವುದು ಪ್ರತಿಯೊಂದು ಇಲಾಖೆಯ ಕರ್ತವ್ಯವಾಗಿದೆ ಎಂದು ರಾಜ್ಯ ಸಂಪನ್ಮೂಲ ಅಧಿಕಾರಿ ಎಚ್.ಶಶಿಧರ್ ತಿಳಿಸಿದರು. ​ಅವರು ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಾನವ ಅಭಿವೃದ್ಧಿ ಯೋಜನೆ ಕುರಿತ ಒಂದು…

Read More

ಸೇವೆಯಿಂದ ನಿವೃತ್ತರಾದರೂ ‘ವೃತ್ತಿ’ಯಿಂದಲ್ಲ: ಸಂಬಳವಿಲ್ಲದೆ ಪಾಠ ಮುಂದುವರಿಸಿದ ಶಿಕ್ಷಕ!

ನವಲಗುಂದ: ಸಾಮಾನ್ಯವಾಗಿ ಸರ್ಕಾರಿ ನೌಕರರು ನಿವೃತ್ತಿಯ ದಿನಾಂಕ ಹತ್ತಿರ ಬರುತ್ತಿದ್ದಂತೆ ಕೆಲಸದಿಂದ ವಿರಮಿಸಲು ಕಾತುರರಾಗಿರುತ್ತಾರೆ. ಆದರೆ, ಇಲ್ಲೊಬ್ಬ ಶಿಕ್ಷಕರು ನಿವೃತ್ತರಾಗಿ ತಿಂಗಳುಗಳೇ ಕಳೆದರೂ, ಮಕ್ಕಳ ಮೇಲಿನ ಕಾಳಜಿಯಿಂದ ಸಂಬಳವಿಲ್ಲದೆ ಪಾಠ ಮುಂದುವರಿಸುವ ಮೂಲಕ ಮಾನವೀಯತೆಯ ಅಪರೂಪದ ಮಾದರಿಯಾಗಿದ್ದಾರೆ. ​ಪಟ್ಟಣದ ಸರ್ಕಾರಿ ಉರ್ದು ಗಂಡು ಮಕ್ಕಳ ಶಾಲೆ ನಂ-1ರ ಕನ್ನಡ ವಿಷಯದ ಶಿಕ್ಷಕರಾದ ಸತೀಶ ಕುಲಕರ್ಣಿ ಅವರೇ ಈ ಮಾದರಿ ವ್ಯಕ್ತಿತ್ವ. ಇವರು ಕಳೆದ 2025ರ ನವೆಂಬರ್ 30ರಂದು ಸರ್ಕಾರಿ ಸೇವೆಗೆ ಅಧಿಕೃತವಾಗಿ ನಿವೃತ್ತಿ ಹೊಂದಿದ್ದರು. ನಿಯಮದ ಪ್ರಕಾರ…

Read More

​ಕುಂದಗೋಳದ ಅಪ್ರಾಪ್ತ ಬಾಲಕನ ಬರ್ಬರ ಹತ್ಯೆ: ರಕ್ಷಣೆ ಮಾಡಬೇಕಾದ ಪೊಲೀಸರದ್ದೇ ನಿರ್ಲಕ್ಷ್ಯ? ಆರೋಪ? ಲಂಚ, ಗಾಂಜಾ ದಂಧೆಯ ಬಗ್ಗೆ ಶಾಸಕರ ಎದುರು ಸ್ಫೋಟಗೊಂಡ ಆಕ್ರೋಶ!

ಕುಂದಗೋಳ: ಶಾಂತಿ ಮತ್ತು ಸೌಹಾರ್ದತೆಗೆ ಹೆಸಾಗಿದ್ದ ಕುಂದಗೋಳ ಪಟ್ಟಣದಲ್ಲಿ ಜನವರಿ 13ರಂದು ನಡೆದ ಅಪ್ರಾಪ್ತ ಬಾಲಕನ ಭೀಕರ ಕೊಲೆ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಈ ರಕ್ತಸಿಕ್ತ ಅಧ್ಯಾಯದ ಹಿಂದೆ ಮಕ್ಕಳನ್ನು ತಿದ್ದಬೇಕಾದ ಹಿರಿಯರ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಇಲಾಖೆಯ ‘ಅಕ್ಷಮ್ಯ ನಿರ್ಲಕ್ಷ್ಯ’ ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ​ಪಟ್ಟಣದ ಸೊಸೈಟಿ ಆವರಣದಲ್ಲಿ ನಿಂಗರಾಜ್ ಮಲ್ಲಿಕಾರ್ಜುನ ಅವಾರಿ ಎಂಬ ಬಾಲಕನನ್ನು ಆತನ ಸ್ನೇಹಿತರೇ ಆದ ಮೂವರು ಅಪ್ರಾಪ್ತರು ಚಾಕುವಿನಿಂದ…

Read More

ಅಂಚೆ ಇಲಾಖೆಯ ಅಪಘಾತ ವಿಮೆ: ಮೃತರ ಕುಟುಂಬಕ್ಕೆ ೧೦ ಲಕ್ಷ ರೂ. ಪರಿಹಾರದ ಚೆಕ್ ವಿತರಣೆ

ಹುಬ್ಬಳ್ಳಿ/ಧಾರವಾಡ: ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಶನಿವಾರ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಹಾಗೂ ಬಜಾಜ್ ಜನರಲ್ ಇನ್ಸೂರೆನ್ಸ್ ಸಹಭಾಗಿತ್ವದಲ್ಲಿ ಅಪಘಾತ ವಿಮಾ ಪರಿಹಾರದ ಚೆಕ್ ವಿತರಣಾ ಕಾರ್ಯಕ್ರಮ ಜರುಗಿತು. ​ಕಳೆದ ತಿಂಗಳು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಮಲ್ಲಿಕಾರ್ಜುನ ಮೆಣಸಿನಕಾಯಿ ಅವರ ಕುಟುಂಬಕ್ಕೆ ಈ ಪರಿಹಾರ ಒದಗಿಸಲಾಗಿದೆ. ಮೃತ ಮಲ್ಲಿಕಾರ್ಜುನ ಅವರು ಅಂಚೆ ಕಚೇರಿಯಲ್ಲಿ ಕೇವಲ ೫೫೭ ರೂ. ಪಾವತಿಸಿ ಅಪಘಾತ ವಿಮೆ ಮಾಡಿಸಿದ್ದರು. ಅವರ ಅಕಾಲಿಕ ಮರಣದ ನಂತರ, ಪಾಲಿಸಿಯ ನಾಮಿನಿಯಾಗಿದ್ದ ಪತ್ನಿ…

Read More

ಮಳಲಿ ಬಸವೇಶ್ವರ ದೇವಸ್ಥಾನದ ಅಂದಾಜು 07 ಗುಂಟೆ ಜಾಗ ಗುಳುಂ: ದಾಖಲೆ ತಿದ್ದಿ ಲಕ್ಷಾಂತರ ರೂಪಾಯಿ ಲೂಟಿ ಆರೋಪ? ದಾಖಲೆ ಸಮೇತ ಎಳೆ ಎಳೆಯಾಗಿ ವರದಿ ಬಿಚ್ಚಿಟ್ಟ ಸಿದ್ದಲಿಂಗೇಶ

ಕುಂದಗೋಳ : ತಾಲೂಕಿನ ಮಳಲಿ ಗ್ರಾಮದ ಐತಿಹಾಸಿಕ ಕುಂದಗೋಳ ಬಸವೇಶ್ವರ ಕರಿಹಂಚಿನ ದೇವಾಲಯಕ್ಕೆ ಸೇರಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವನ್ನು ಹಿಂದಿನ ಗ್ರಾಮ ಪಂಚಾಯತಿ ಅಧಿಕಾರಿಗಳು ಶಾಮೀಲಾಗಿ, ದಾಖಲೆಗಳನ್ನು ತಿದ್ದುವ ಮೂಲಕ ದೇವಸ್ಥಾನದ ಅಕ್ಕಪಕ್ಕದವರಿಗೆ ಹಗಲು ದರೋಡೆ ಮಾಡಿಸಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದು, ದೇವರ ಆಸ್ತಿ ನುಂಗಿದವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಖಲೆಗಳ ಪ್ರಕಾರ 1961-62 ರಲ್ಲಿ ದೇವಸ್ಥಾನಕ್ಕೆ ಅಂದಾಜು 06 ರಿಂದ 07 ಗುಂಟೆ ಜಾಗವಿತ್ತು. ಆದರೆ 1999 ರಿಂದ ಗ್ರಾಮ…

Read More