2 ವರ್ಷದಲ್ಲಿ 2 ಸಾವಿರ ಮಕ್ಕಳು ಸರ್ಕಾರಿ ಶಾಲೆಯಿಂದ ಹೊರಕ್ಕೆ: ಶಾಸಕ ಎಂ.ಆರ್. ಪಾಟೀಲರಿಂದ ಸರ್ಕಾರಕ್ಕೆ ತರಾಟೆ
ಶೌಚಾಲಯವಿಲ್ಲದೆ ಶಾಲೆಗೆ ಬರ್ತಿಲ್ಲ ಮಕ್ಕಳು ಕುಂದಗೋಳ: ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲದಿರುವುದು, ಇದ್ದರೂ ಬಹುತೇಕವು ದುರಸ್ತಿ ಅಗತ್ಯವಿರುವ ಸ್ಥಿತಿಯಲ್ಲಿ ಇರುವುದರಿಂದ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕುಂದಗೋಳದ ಬಿಜೆಪಿ ಶಾಸಕ ಎಂ.ಆರ್. ಪಾಟೀಲರು ಆರೋಪಿಸಿದರು. ಗುರುವಾರ ವಿಧಾನಸಭೆಯ ಪ್ರಶೋತ್ತರ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕುಂದಗೋಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರದ ಅಧಿಕಾರಿಗಳೇ ಸಲ್ಲಿಸಿದ ವರದಿ ಪ್ರಕಾರ 200 ಶೌಚಾಲಯಗಳ ಅಗತ್ಯವಿದೆ. ಆದರೆ, ಕಳೆದ ಮೂರು ವರ್ಷಗಳಲ್ಲಿ ಕ್ಷೇತ್ರಕ್ಕೆ ಕೇವಲ ಎರಡು…

