ಅಣ್ಣಿಗೇರಿ ತುಪ್ಪದ ಕುರಹಟ್ಟಿ ಗ್ರಾಮದಲ್ಲಿ ಕಡಲೆ ಬಿ.ಜಿ.ಡಿ. 111-1 ಕ್ಷೇತ್ರೋತ್ಸವ ಯಶಸ್ವಿ
ಅಣ್ಣಿಗೇರಿ: ಅಣ್ಣಿಗೇರಿ ತಾಲೂಕಿನ ತುಪ್ಪದ ಕುರಹಟ್ಟಿ ಗ್ರಾಮದ ಪ್ರಗತಿಪರ ರೈತ ಕೃಷ್ಣ ರೆಡ್ಡಿ ಸಾಸ್ಟಿಹಳ್ಳಿ ಅವರ ಜಮೀನಿನಲ್ಲಿ ಹಮ್ಮಿಕೊಳ್ಳಲಾದ ಬಿ.ಜಿ.ಡಿ. 111-1 (BJD 111-1) ಸುಧಾರಿತ ದೇಶಿ ಕಡಲೆ ತಳಿಯ ಕ್ಷೇತ್ರೋತ್ಸವವು ಸುತ್ತಮುತ್ತಲಿನ ಗ್ರಾಮಗಳ ರೈತರ ಗಮನ ಸೆಳೆಯಿತು. ಈ ಕ್ಷೇತ್ರೋತ್ಸವದಲ್ಲಿ ಸುಧಾರಿತ ಕಡಲೆ ತಳಿಯ ಬೆಳವಣಿಗೆ, ಇಳುವರಿ ಸಾಮರ್ಥ್ಯ ಹಾಗೂ ಕೃಷಿ ತಾಂತ್ರಿಕ ಅಂಶಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ಕ್ಷೇತ್ರ ವೀಕ್ಷಣೆ ಸಂದರ್ಭದಲ್ಲಿ ಮಾತನಾಡಿದ ಅಣ್ಣಿಗೇರಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೀರಣ್ಣಗಡ…

