ಬೆಂಗಳೂರು ಫ್ಲೈಓವರ್ ಮೇಲೆ ಭೀಕರ ದುರಂತ: ಬಸ್ಗೆ ಕಾರು ಡಿಕ್ಕಿ, ದೊಡ್ಡಬಳ್ಳಾಪುರದ ಐವರು ಯುವಕರ ಸಾವು
ಬೆಂಗಳೂರು: ರಾಜಧಾನಿಯ ಫ್ಲೈಓವರ್ ಮೇಲೆ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದೊಡ್ಡಬಳ್ಳಾಪುರದ ಐವರು ಯುವಕರು ದುರ್ಮರಣಕ್ಕೀಡಾಗಿದ್ದಾರೆ. ಅತಿಯಾದ ವೇಗದಿಂದ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಎದುರುಗಡೆಯಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿದ್ದೇ ಈ ಕರುಣಾಜನಕ ಘಟನೆಗೆ ಕಾರಣವಾಗಿದೆ. ದುರಂತದ ವಿವರ: ಮೃತರನ್ನು ದೊಡ್ಡಬಳ್ಳಾಪುರದ ನಿವಾಸಿಗಳಾದ ಲಲಿತ್ (22), ಧನುಷ್ (21), ದುರ್ಗಾ ಪ್ರಸಾದ್ (20), ಹರ್ಷಿತ್ (20) ಮತ್ತು ಕೇಶವ್ (19) ಎಂದು ಗುರುತಿಸಲಾಗಿದೆ. ಲಲಿತ್ ಇತ್ತೀಚೆಗಷ್ಟೇ ಸೆಕೆಂಡ್ ಹ್ಯಾಂಡ್ ಟಾಟಾ…

