ಕರ್ನಾಟಕ ಸಂಗ್ರಾಮ ಸೇನೆ ವತಿಯಿಂದ ಹುಬ್ಬಳ್ಳಿಯಲ್ಲಿ 500 ಮೀಟರ್ ಕನ್ನಡ ಧ್ವಜ ಪ್ರದರ್ಶನ: ಸಾಧಕರಿಗೆ ಪ್ರಶಸ್ತಿ ವಿತರಣೆ
ಹುಬ್ಬಳ್ಳಿ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸಂಗ್ರಾಮ ಸೇನೆಯು ಆಯೋಜಿಸಿದ್ದ 500 ಮೀಟರ್ ಉದ್ದದ ಬೃಹತ್ ಕನ್ನಡ ಧ್ವಜ ಪ್ರದರ್ಶನ ಕಾರ್ಯಕ್ರಮವು ಭುವನೇಶ್ವರಿಗೆ ಜಯಘೋಷ ಹಾಕುವ ಮೂಲಕ ಯಶಸ್ವಿಯಾಗಿ ನಡೆಯಿತು. ಕುಂದಗೋಳದ ಕಲ್ಯಾಣಪುರ ಮಠದ ಶ್ರೀ ಅಭಿನವ ಬಸವಣ್ಣಜ್ಜನವರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮೆರಗು ತಂದರು. ದುರ್ಗದ ಬೈಲ್ನಿಂದ ಆರಂಭಗೊಂಡ ಧ್ವಜ ಪ್ರದರ್ಶನವು ನಗರದ ಪ್ರಮುಖ ಕೇಂದ್ರವಾದ ಚೆನ್ನಮ್ಮ ಸರ್ಕಲ್ವರೆಗೆ ಸಾಗಿತು. ಹಳದಿ ಮತ್ತು ಕೆಂಪು ವರ್ಣದ ಈ ಬೃಹತ್ ಧ್ವಜವನ್ನು ಹೊತ್ತು ಸಾಗಿದ ನೂರಾರು ಕನ್ನಡಾಭಿಮಾನಿಗಳು,…

