ವಿಶ್ವ ಪಾರ್ಶ್ವವಾಯು ದಿನ: ಹುಬ್ಬಳ್ಳಿಯಲ್ಲಿ ನಾಳೆ ಜನಜಾಗೃತಿ ವಾಕಾಥಾನ್; ಶಾಸಕ ಮಹೇಶ್ ಟೆಂಗಿನಕಾಯಿ ಅವರಿಂದ ಚಾಲನೆ, ನೂರಾರು ವಿದ್ಯಾರ್ಥಿಗಳ ಭಾಗಿ
Recent Views 9 ಹುಬ್ಬಳ್ಳಿ: ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ಬಾಲಾಜಿ ಆಸ್ಪತ್ರೆಯ ವತಿಯಿಂದ ಅಕ್ಟೋಬರ್ 29ರಂದು (ನಾಳೆ) ನಗರದಲ್ಲಿ ಜನಜಾಗೃತಿ ವಾಕಾಥಾನ್ ಹಮ್ಮಿಕೊಳ್ಳಲಾಗಿದೆ. ನಾಳೆ ಬೆಳಗ್ಗೆ 8 ಗಂಟೆಗೆ ಬಾಲಾಜಿ ಆಸ್ಪತ್ರೆ ಆವರಣದಿಂದ ಹೊರಡಲಿರುವ ಈ ಜಾಥಾಕ್ಕೆ ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಚಾಲನೆ ನೀಡಲಿದ್ದಾರೆ. ಆಸ್ಪತ್ರೆಯ ಚೇರ್ಮನ್ ಡಾ. ಕ್ರಾಂತಿಕಿರಣ್ ಅವರು ವಾಕಾಥಾನ್ನ ನೇತೃತ್ವ ವಹಿಸಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ. ವಾಕಾಥಾನ್ ಆಸ್ಪತ್ರೆಯಿಂದ ಆರಂಭಗೊಂಡು, ಕೋರ್ಟ್ ಮುಂಭಾಗದ ರಸ್ತೆ, ಶಿರೂರ…

