‘ಭಾರತ ಭಾಗ್ಯ ವಿಧಾತ’ ಬಿರುದಾಂಕಿತ ಪ್ರಧಾನಿ ಮೋದಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ‘ನವ ಸಂಕಲ್ಪ’ ಪಾಲನೆಗೆ ಕರೆ
ಉಡುಪಿ: ನ 28: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರದಂದು (ನವೆಂಬರ್ 28,) ಕೃಷ್ಣನೂರು ಉಡುಪಿಗೆ ಐತಿಹಾಸಿಕ ಭೇಟಿ ನೀಡಿದರು. ಪ್ರಧಾನಿಯವರ ಈ ಭೇಟಿಯು ‘ಲಕ್ಷ ಕಂಠ ಗೀತಾ ಪಾರಾಯಣ’ ಕಾರ್ಯಕ್ರಮದ ಮುಖ್ಯ ಭಾಗವಾಗಿತ್ತು. ಪ್ರಧಾನಿಯವರ ಆಗಮನದ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು ಹಾಗೂ ಅದ್ಧೂರಿ ರೋಡ್ ಶೋ ಮತ್ತು ಮಹತ್ವದ ಆಧ್ಯಾತ್ಮಿಕ ಸಮಾರಂಭಗಳು ಜರುಗಿದವು. ಮಂಗಳೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಉಡುಪಿ ತಲುಪಿದ ಪ್ರಧಾನಿಯವರು, ಬನ್ನಂಜೆ ವೃತ್ತದಿಂದ ಕಾಳಸಂಕ ವೃತ್ತದವರೆಗೆ…

