ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಅಧಿಕಾರ ಸ್ವೀಕಾರ

ಹೊಸದಿಲ್ಲಿ: ಸಿ.ಪಿ. ರಾಧಾಕೃಷ್ಣನ್ ಅವರು ಶುಕ್ರವಾರ ಭಾರತದ 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಧಾಕೃಷ್ಣನ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ, ಮಾಜಿ ಉಪರಾಷ್ಟ್ರಪತಿಗಳಾದ ಜಗದೀಪ್ ಧನ್‌ಕರ್ ಮತ್ತು ಎಂ. ವೆಂಕಯ್ಯ ನಾಯ್ಡು, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಸೇರಿದಂತೆ ಹಲವಾರು ಗಣ್ಯರು…

Read More

ಅಮೇರಿಕಾದಲ್ಲಿ ಚಾರ್ಲಿ ಕಿರ್ಕ ಹತ್ಯೆ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ

ವಾಷಿಂಗ್ಟನ್, ಸೆ.11:ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತ ಸಹಾಯಕರಲ್ಲಿ ಒಬ್ಬನಾಗಿ ಗುರುತಿಸಿಕೊಂಡಿದ್ದ ಬಲಪಂಥೀಯ ಟಾಕ್‌ಶೋ ನಿರೂಪಕ ಮತ್ತು ರಾಜಕೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ (31) ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಘಟನೆ ಸೆಪ್ಟೆಂಬರ್ 10ರಂದು ಉತಾಹ್ ವ್ಯಾಲಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದಿದೆ. “ದಿ ಅಮೇರಿಕನ್ ಕಮ್ಯಾಕ್ ಟೂರ್” ಹೆಸರಿನ ತನ್ನ ರಾಷ್ಟ್ರೀಯ ಭಾಷಣ ಸರಣಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಮಾತನಾಡುತ್ತಿದ್ದಾಗಲೇ ಅಕಸ್ಮಾತ್ ದಾಳಿಕೋರ ಗುಂಡು…

Read More

ಉಪರಾಷ್ಟ್ರಪತಿ ಚುನಾವಣೆ: ಎನ್ಡಿಎಗೆ ಭರ್ಜರಿ ಬಹುಮತದಿಂದ ಪಿ. ರಾಧಾಕೃಷ್ಣನ್ ಅವರು‌ 15 ನೇ ಉಪರಾಷ್ಟ್ರಪತಿಯಾಗಿ ಆಯ್ಕೆ,

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ನಾಯಕರಾದ ಪೊನ್ನುಸ್ವಾಮಿ ರಾಧಾಕೃಷ್ಣನ್ ಅವರು ಮಂಗಳವಾರ ಭಾರತದ 15ನೇ ಉಪರಾಷ್ಟ್ರಪತಿಯಾಗಿ ಭರ್ಜರಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ಈ ಗೆಲುವಿನೊಂದಿಗೆ, ಅವರು ತಮಿಳುನಾಡಿನಿಂದ ಈ ಉನ್ನತ ಹುದ್ದೆಗೇರಿದ ಮೂರನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರೋಗ್ಯದ ಕಾರಣ ನೀಡಿ ಜುಲೈ 21ರಂದು ರಾಜೀನಾಮೆ ನೀಡಿದ್ದ ಜಗದೀಪ್ ಧನಕರ್‌ ಅವರ ಸ್ಥಾನವನ್ನು 67 ವರ್ಷ ವಯಸ್ಸಿನ ರಾಧಾಕೃಷ್ಣನ್ ತುಂಬಲಿದ್ದಾರೆ. ಬೆಳಗ್ಗೆ 10 ರಿಂದ ಸಂಜೆ 5…

Read More

ನೇಪಾಳದಲ್ಲಿ ರಾಜಕೀಯ ಅಶಾಂತಿ: ಒಲಿ ಸರ್ಕಾರಕ್ಕೆ ಸಂಕಷ್ಟ, ಅಧ್ಯಕ್ಷರ ನಿವಾಸಕ್ಕೆ ಹಾನಿ

ಕಠ್ಮಂಡು: ಕಳೆದ ಕೆಲವು ದಿನಗಳಿಂದ ತೀವ್ರ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿರುವ ನೇಪಾಳದಲ್ಲಿ ಸದ್ಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಒಲಿ ಅವರ ಸರ್ಕಾರದ ವಿರುದ್ಧ ಹೆಚ್ಚುತ್ತಿರುವ ಸಾರ್ವಜನಿಕ ಆಕ್ರೋಶ ಮತ್ತು ಪ್ರತಿಭಟನೆಗಳು ಹಿಂಸಾತ್ಮಕ ತಿರುವು ಪಡೆದಿವೆ. ಈ ಬೆಳವಣಿಗೆಗಳ ಮಧ್ಯೆ ಒಲಿ ಸರ್ಕಾರದ ಐವರು ಮಂತ್ರಿಗಳು ಸಾಮೂಹಿಕವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಸರ್ಕಾರ ತೀವ್ರ ಒತ್ತಡಕ್ಕೆ ಸಿಲುಕಿದೆ. ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿದ್ದು, ಅಧ್ಯಕ್ಷರ ನಿವಾಸಕ್ಕೂ ಹಾನಿಗೊಳಗಾಗಿದೆ. ಅಧ್ಯಕ್ಷ ರಾಮ್ ಚಂದ್ರ ಪೌಡೆಲ್…

Read More

ನೇಪಾಳ: ಸಾಮಾಜಿಕ ಜಾಲತಾಣ ನಿಷೇಧ ವಿರೋಧಿಸಿ ಪ್ರತಿಭಟನೆ: 19 ಮಂದಿ ಬಲಿ, ದಂಗೆಗೆ ತಿರುಗಿದ ಪ್ರತಿಭಟನೆಗಳು

ಕಠ್ಮಂಡು: ಪ್ರಜಾಪ್ರಭುತ್ವದ ಆಶಯಗಳನ್ನು ಬುಡಮೇಲು ಮಾಡುವಂತಿದ್ದ ಸರ್ಕಾರದ ನಿಲುವುಗಳ ವಿರುದ್ಧ ನೇಪಾಳದಲ್ಲಿ ಜ್ವಾಲಾಮುಖಿ ಭುಗಿಲೆದ್ದಿದೆ. ರಾಜಕೀಯ ಭ್ರಷ್ಟಾಚಾರ ಮತ್ತು ಸಾಮಾಜಿಕ ಜಾಲತಾಣಗಳ ಮೇಲೆ ಹೇರಿದ ನಿಷೇಧವನ್ನು ವಿರೋಧಿಸಿ ನಡೆದ ಬೃಹತ್ ಪ್ರತಿಭಟನೆಗಳು, ಭದ್ರತಾ ಪಡೆಗಳ ಜೊತೆಗಿನ ಘರ್ಷಣೆಗೆ ಕಾರಣವಾಗಿ ಕನಿಷ್ಠ 19 ಮಂದಿ ಬಲಿಯಾಗಿದ್ದಾರೆ. ಘಟನೆ ಹಿನ್ನೆಲೆ:ಸರ್ಕಾರದ ನಿರಂತರ ಭ್ರಷ್ಟಾಚಾರ ಮತ್ತು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿರುವ ಕ್ರಮಗಳ ವಿರುದ್ಧ ನೇಪಾಳದ ಯುವ ಸಮುದಾಯ (ಜೆನರೇಷನ್ Z) ಅಸಮಾಧಾನಗೊಂಡಿತ್ತು. ಇತ್ತೀಚೆಗೆ ಸರ್ಕಾರವು ಫೇಸ್‌ಬುಕ್, ಎಕ್ಸ್ ಮತ್ತು ಯೂಟ್ಯೂಬ್‌…

Read More

ಆಸ್ತಿ ನೋಂದಣಿಯಿಂದಲೇ ಸಂಪೂರ್ಣ ಮಾಲೀಕತ್ವ ಸಿಗುವುದಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಆಸ್ತಿ ನೋಂದಣಿಯಿಂದಲೇ ಸಂಪೂರ್ಣ ಮಾಲೀಕತ್ವ ಸಿಗುವುದಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನವದೆಹಲಿ, ಸೆ. 7 – ಆಸ್ತಿ ನೋಂದಣಿ ಮಾಡಿಸಿಕೊಂಡರೆ ಮಾತ್ರ ಸಂಪೂರ್ಣ ಮಾಲೀಕತ್ವ ಸಿಗುತ್ತದೆ ಎಂದುಕೊಳ್ಳುವುದು ತಪ್ಪು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ಆಸ್ತಿ ಖರೀದಿಸುವ ಜನರ ಚಿಂತನೆಯನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಅಪೆಕ್ಸ್ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ಆಸ್ತಿ ನೋಂದಣಿ ಕೇವಲ ಆರ್ಥಿಕ ವ್ಯವಹಾರ ನಡೆದಿದೆ ಎಂಬುದನ್ನು ದೃಢೀಕರಿಸುವ ದಾಖಲೆ ಮಾತ್ರ. ಇದು ಸಂಪೂರ್ಣ ಮಾಲೀಕತ್ವವನ್ನು…

Read More

ರಕ್ತ ಚಂದ್ರಗ್ರಹಣಕ್ಕೆ ದೇಶಾದ್ಯಂತ ಸಜ್ಜು – 82 ನಿಮಿಷಗಳ ಸುದೀರ್ಘ ಗ್ರಹಣ ವೀಕ್ಷಣೆಗೆ ಉತ್ಸಾಹ

ರಕ್ತ ಚಂದ್ರಗ್ರಹಣಕ್ಕೆ ದೇಶಾದ್ಯಂತ ಸಜ್ಜು – 82 ನಿಮಿಷಗಳ ಸುದೀರ್ಘ ಗ್ರಹಣ ವೀಕ್ಷಣೆಗೆ ಉತ್ಸಾಹ ನವದೆಹಲಿ, ಸೆ.07 – ಇಂದು ರಾತ್ರಿ ಆಕಾಶದಲ್ಲಿ ಅಪರೂಪದ ದೃಶ್ಯ ಕಣ್ತುಂಬಿಕೊಳ್ಳಲಿದೆ. ‘ಬ್ಲಡ್ ಮೂನ್’ ಎಂದೇ ಕರೆಯಲ್ಪಡುವ ರಕ್ತ ಚಂದ್ರಗ್ರಹಣವನ್ನು ಭಾರತದೆಲ್ಲೆಡೆ ಜನತೆ ವೀಕ್ಷಿಸಬಹುದಾಗಿದೆ. ರಾಹುಗ್ರಸ್ತ ಈ ಗ್ರಹಣವು ರಾತ್ರಿ 8.58ಕ್ಕೆ ಆರಂಭಗೊಂಡು, ರಾತ್ರಿ 11.01ರಿಂದ ಸಂಪೂರ್ಣ ಗ್ರಹಣ ಸಂಭವಿಸಿ, ಮಧ್ಯರಾತ್ರಿ 12.22ರವರೆಗೆ ಮುಂದುವರಿಯಲಿದೆ. ಒಟ್ಟಾರೆ 82 ನಿಮಿಷಗಳ ಕಾಲ ಈ ಅಪರೂಪದ ದರ್ಶನ ಕಾಣಿಸಲಿದೆ. ವಿಜ್ಞಾನಿಗಳ ಪ್ರಕಾರ, ಈ ದಶಕದ…

Read More

ರಸ್ತೆ ಬಂದ ಹೆಲಿಕಾಪ್ಟರ್ ನಲ್ಲಿ 40 ಸಾವಿರ ಕರ್ಖು ಮಾಡಿ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು

ಪಿಥೋರ್‌ಗಢ, ಸೆ.7:ಮಳೆ, ಪ್ರವಾಹ, ಭೂಕುಸಿತ – ಹೀಗೆ ಪ್ರಕೃತಿ ವಿಪತ್ತುಗಳಿಂದಾಗಿ ರಸ್ತೆಗಳು ಬಂದ್ ಆಗಿದ್ದರೂ, ಒಂದು ವರ್ಷ ವ್ಯರ್ಥವಾಗದಂತೆ ಕಾಪಾಡಿಕೊಳ್ಳಲು ವಿದ್ಯಾರ್ಥಿಗಳು ಅಸಾಧಾರಣ ಸಾಹಸ ಮಾಡಿದ್ದಾರೆ. ಉತ್ತರಾಖಂಡ ಮುಕ್ತ ವಿಶ್ವವಿದ್ಯಾಲಯದ ಬಿ.ಇ.ಇಡಿ ಪರೀಕ್ಷೆ ಬರೆಯಲು ರಾಜಸ್ಥಾನದ ಬಲೋತ್ರಾದ ವಿದ್ಯಾರ್ಥಿಗಳು ಹೆಲಿಕಾಪ್ಟರ್ ಬಾಡಿಗೆ ಪಡೆದು ಪರೀಕ್ಷಾ ಕೇಂದ್ರ ತಲುಪಿ ಪರೀಕ್ಷೆ ಬರೆದಿದ್ದಾರೆ. ಬುಧವಾರ ಮುನ್ಸಾರಿ ಮಹಾವಿದ್ಯಾಲಯದಲ್ಲಿ ಪರೀಕ್ಷೆ ನಡೆಯಬೇಕಿತ್ತು. ವಿದ್ಯಾರ್ಥಿಗಳಾದ ಒಮರಮ್ ಜಾಟ್, ಮಗರಂ ಜಾಟ್, ಪ್ರಕಾಶ್ ಗೋದಾರ ಜಾಟ್ ಹಾಗೂ ನರಪತ್ ಕುಮಾರ್ ಇಬ್ಬರು ದಿನಗಳ ಮುಂಚೆಯೇ…

Read More

ಗುಜರಾತ:ಪಾವಗಢದಲ್ಲಿ ರೋಪ್‌ವೇ ದುರಂತ: ಆರು ಕಾರ್ಮಿಕರು ದುರ್ಮರಣ

ಗುಜರಾತ್: ಪ್ರಸಿದ್ಧ ಯಾತ್ರಾಸ್ಥಳವಾದ ಪಾವಗಢದಲ್ಲಿ ರೋಪ್‌ವೇ ನಿರ್ಮಾಣ ಕಾರ್ಯಕ್ಕೆ ಬಳಸುತ್ತಿದ್ದ ಸರಕು ಸಾಗಣೆ ಟ್ರಾಲಿಯ ವೈಯರ್ ತುಂಡಾಗಿ ಬಿದ್ದ ಪರಿಣಾಮ ಆರು ಮಂದಿ ಕಾರ್ಮಿಕರು ದುರ್ಮರಣ ಹೊಂದಿದ್ದಾರೆ. ಈ ದುರಂತ ಇಡೀ ಪ್ರದೇಶದಲ್ಲಿ ಆತಂಕ ಮತ್ತು ಶೋಕದ ವಾತಾವರಣ ಸೃಷ್ಟಿಸಿದೆ. ಪಂಚಮಹಲ್ ಪೊಲೀಸ್ ಉಪ ವರಿಷ್ಠಾಧಿಕಾರಿ ಹರ್ಷ ದುಧಾತ್ ಅವರು ನೀಡಿರುವ ಮಾಹಿತಿ ಪ್ರಕಾರ, ರೋಪ್‌ವೇ ನಿರ್ಮಾಣಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಸಾಗಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ. ತಾಂತ್ರಿಕ ದೋಷ ಅಥವಾ ತೂಕದ ಕಾರಣದಿಂದಾಗಿ ಟ್ರಾಲಿಯು ನಿಯಂತ್ರಣ…

Read More

ಆನ್‌ಲೈನ್ ಗೇಮಿಂಗ್ ನಿಷೇಧ: ಎಂಪಿಎಲ್‌ನಲ್ಲಿ 300 ಸಿಬ್ಬಂದಿ ವಜಾಗೊಳಿಸಲು ನಿರ್ಧಾರ

ನವದೆಹಲಿ: ಆನ್‌ಲೈನ್ ಗೇಮಿಂಗ್ ಆ್ಯಪ್ ‘ಮೊಬೈಲ್ ಪ್ರೀಮಿಯರ್ ಲೀಗ್’ (ಎಂಪಿಎಲ್) ತನ್ನ ಶೇ. 60ರಷ್ಟು ಸ್ಥಳೀಯ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಹಣ ಕಟ್ಟಿ ಆಡಲಾಗುವ ಆನ್‌ಲೈನ್ ಆಟಗಳನ್ನು ನಿಷೇಧಿಸಿರುವುದರಿಂದ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ಹೇಳಲಾಗಿದೆ. ಸರ್ಕಾರದ ಈ ನಿರ್ಧಾರವು ದೇಶದ ಆನ್‌ಲೈನ್ ಗೇಮಿಂಗ್ ಉದ್ಯಮವನ್ನು ಸಂಕಷ್ಟಕ್ಕೆ ದೂಡಿದ್ದು, ಅದರ ಪರಿಣಾಮವಾಗಿ ಸಿಬ್ಬಂದಿ ವಜಾಗೊಳಿಸುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲು ಕಂಪನಿಗಳು ಮುಂದಾಗಿವೆ….

Read More